ಶ್ರೀ ಜಗದ್ಗುರು ಜಯವಿಭವ ಎಜುಕೇಶನಲ್ ಸೊಸೈಟಿ (ಎಸ್ ಜೆಜೆ ಇಎಸ್)ಯು ನರಸರಾಜ ಕ್ಯಾಂಪಸ್ಸಿನಲ್ಲಿ ಫೆಬ್ರವರಿ 18, 1973ರಂದು ಉದ್ಘಾಟನೆಗೊಂಡಿತು. ಅಂದಿನ ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಶ್ರೀ ಎಚ್ ಎಮ್ ಚನ್ನಬಸವಯ್ಯ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕ್ಯಾಂಪಸ್ ಸಮಾಜದ ವಿಸ್ತರಣೆ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ, ಹತ್ತು ವರ್ಷಗಳಲ್ಲಿ ಅನೇಕ ಶಾಲೆಗಳನ್ನು ಆಯೋಜಿಸುತ್ತಿದೆ. ಇತ್ತೀಚೆಗೆ 2023_2024 ರ ಶೈಕ್ಷಣಿಕ ವರ್ಷದಲ್ಲಿ 25 ಕಂಪ್ಯೂಟರ್ ಗಳು, ಹೈ_ಸ್ಪೀಡ್ ವೈ_ಫೈ (ಅತಿ ವೇಗದ ವೈ..ಫೈ )ಮತ್ತು ಬ್ಯಾಟರಿ ಬ್ಯಾಕಪ್ ನೊಂದಿಗೆ ಹೊಸ, ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ಅನ್ನು ಈ ಕ್ಯಾಂಪಸ್ ನಲ್ಲಿ ಸ್ಥಾಪಿಸಲಾಯಿತು. ಇದು ಇನ್ಪೋಸಿಸ್ ಫೌಂಡೇಶನ್ ನ ಸಮಾಜಮುಖಿ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಗಳು ದೇಣಿಗೆಯಾಗಿದ್ದು, ಪೌಂಡೇಶನ್ ನ ಈ ಉದಾರ ದೇಣಿಗೆಗೆ ಧನ್ಯವಾದಗಳು.
ಈ ಕ್ಯಾಂಪಸ್ ವಾರ್ಷಿಕವಾಗಿ ವಚನ ಗಾಯನ ಸ್ಪರ್ಧೆಯನ್ನು ನಡೆಸುವ ಮೂಲಕ ಸಂಸ್ಥೆಯ ಸಂಸ್ಥಾಪಕರ ದಿನವನ್ನು ಆಚರಿಸುತ್ತದೆ. ಸಂಸ್ಥಾಪಕರ ದಿನವನ್ನು ಮೂಲತಃ ಫೆಬ್ರವರಿ 12ರಂದು ( ಸಂಸ್ಥಾಪಕರ ಮರಣ ವಾರ್ಷಿಕೋತ್ಸವ ) ಆಚರಿಸುತ್ತಿದ್ದು, ನಂತರ ಅದನ್ನು ನವೆಂಬರ್ 14 (ಸಂಸ್ಥಾಪಕರ.ಜನ್ಮ ವಾರ್ಷಿಕೋತ್ಸವ ) ಕ್ಕೆ ಬದಲಾಯಿಸಲಾಯಿತು. ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಗೋರು ಚೆನ್ನಬಸಪ್ಪ ಅವರು ಸಂಸ್ಥಾಪಕ ಅಧ್ಯಕ್ಷರ ಪ್ರತಿಮೆಯನ್ನು ಅನಾವರಣಗೊಳಿಸಿದ ಸ್ಥಳವು ನರಸರಾಜ ಕ್ಯಾಂಪಸ್ ಆಗಿದೆ.
ಒಟ್ಟಾರೆಯಾಗಿ, ನರಸರಾಜ ಕ್ಯಾಂಪಸ್ ಎಸ್ ಜೆ ಜೆ ಇ ಎಸ್ ನ ಮೂಲ ಆಧಾರವಾಗಿದ್ದು, ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.