About-Society
ಸಂಸ್ಥೆಯ ಬಗ್ಗೆ

ಹೋಮ್ | ನಮ್ಮ ಬಗ್ಗೆ | ಸಮಾಜದ ಬಗ್ಗೆ

ಸಂಸ್ಥೆಯ ಬಗ್ಗೆ

ಬಗ್ಗೆ

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯನ್ನು (SJJES ) 1962 ರಲ್ಲಿ ಕೈಗಾರಿಕೋದ್ಯಮಿಗಳು ಹಾಗೂ ದೂರ ದೃಷ್ಟಿಯುಳ್ಳವರಾಗಿದ್ದ ಶ್ರೀ ವೀರಭದ್ರಪ್ಪ ಎಂ ಚಿಗಟೇರಿಯವರು ಸ್ಥಾಪಿಸಿದರು. ಇವರು ತಮ್ಮ ತಂದೆ ಶ್ರೀ ಧರ್ಮಪ್ರಕಾಶ ಮುರಿಗೆಪ್ಪ ಚಿಗಟೇರಿಯವರ ಪ್ರಭಾವದೊಂದಿಗೆ ಒಂದು ಸದುದ್ದೇಶದಿಂದ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಸಂಸ್ಥೆಯು ಕರ್ನಾಟಕದ ಸ್ಮಾರ್ಟ್ ಸಿಟಿ ದಾವಣಗೆರೆಯ ಹಳೆಯ ಭಾಗದ (ಹಿಂದುಳಿದ ವರ್ಗಗಳ ಮಕ್ಕಳು ಸೇರಿದಂತೆ ) ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವುದರ ಮೂಲಕ ಸಮಾಜದ ಶೈಕ್ಷಣಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. 

ಮೈಸೂರು ರಾಜ್ಯದ ಮಾಜಿ ಸಿಎಂ ಶ್ರೀ ನಿಜಲಿಂಗಪ್ಪನವರು ಹಾಗೂ ದಾವಣಗೆರೆಯ ಗಣ್ಯ ನಾಗರಿಕರ ಬೆಂಬಲದೊಂದಿಗೆ ಸಂಸ್ಥೆಯನ್ನು1962 ರಲ್ಲಿ ಸಾಮಾಜಿಕ ಸೇವೆಗಾಗಿ ಸ್ಥಾಪಿಸಲಾಯಿತು. ಮೈಸೂರು ಸೊಸೈಟಿಗಳ ನೋಂದಣಿ ಕಾಯಿದೆ ಅಡಿಯಲ್ಲಿ ಲಾಭದ ಉದ್ದೇಶವಿಲ್ಲದೆ ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ನೋಂದಾಯಿಸಲಾಗಿದೆ. ಸಂಸ್ಥೆಯು ಮೂಲಭೂತ ಶಿಕ್ಷಣವನ್ನು ಕೈಗೆಟಕುವ ದರದಲ್ಲಿ ನೀಡಲು, ತಾರತಮ್ಯವಿಲ್ಲದೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಬದ್ಧವಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಲು ಅನುವು ಮಾಡಿಕೊಡುತ್ತದೆ.

ಆರಂಭದಲ್ಲಿ, SJJES ಎರಡು ಶಾಲೆಗಳನ್ನು ಪ್ರಾರಂಭಿಸಿತು - ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆ ಹಾಗೂ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆ. ಇವುಗಳನ್ನು ಹಳೇ ದಾವಣಗೆರೆಯಲ್ಲಿ ಹೆಣ್ಣು ಮತ್ತು ಗಂಡುಮಕ್ಕಳ ಶಿಕ್ಷಣ ಸಂಸ್ಥೆಗಳ ಕೊರತೆಯನ್ನು ನೀಗಿಸಲು ಸ್ಥಾಪಿಸಲಾಯಿತು. ದಶಕಗಳಲ್ಲಿ SJJES ತನ್ನ ವ್ಯಾಪ್ತಿಯನ್ನು ವಿಸ್ತರಿಸಿ, ನರ್ಸರಿಯಿಂದ ಪ್ರೌಢಶಾಲಾ ಹಂತದವರೆಗಿನ ಒಟ್ಟು ಒಂಭತ್ತು ಶಾಲೆಗಳನ್ನು ಸ್ಥಾಪಿಸಿದೆ. ಈ ಶಾಲೆಗಳು ವಿದ್ಯಾರ್ಥಿಗಳ ಇಚ್ಛೆಯ ಅನುಸಾರ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಕಲಿಯಲು ಅವಕಾಶ ನೀಡುತ್ತದೆ.

SJJES ತನ್ನ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಅವಕಾಶ ವಂಚಿತ ಸಮುದಾಯಗಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಸಮರ್ಪಿತವಾಗಿದೆ. ಸಂಸ್ಥೆಯ ಬೆಳವಣಿಗೆಯು ಸಮಾನತೆಗೆ ಹಾಗೂ ಅದರ ಅಚಲಬದ್ಧತೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪೂರಕ ವಾತಾವರಣವನ್ನು ಒದಗಿಸುವುದು ಸಂಸ್ಥೆಯ ಗುರಿಯಾಗಿದೆ.

ಉದ್ದೇಶ

SJJES ನಲ್ಲಿ, ನಾವು ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣದ ಮೂಲಕ ಹಿಂದುಳಿದ ಮಕ್ಕಳನ್ನು ಸಬಲಗೊಳಿಸುತ್ತೇವೆ., ನಮ್ಮ ಕಲಿಕಾಂಶಗಳು ಶೈಕ್ಷಣಿಕ ಉತ್ಕೃಷ್ಟತೆ, ಉತ್ತಮ ನಡತೆ ಮತ್ತು ಸರ್ವತೋಮುಖ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಶಿಕ್ಷಣ, ಪಠ್ಯೇತರ ಚಟುವಟಿಕೆಗಳು ಮತ್ತು ವೃತ್ತಿಪರ ತರಬೇತಿಯ ಮೂಲಕ ಸಾಮಾಜಿಕ-ಆರ್ಥಿಕ ಬದಲಾವಣೆ ಮತ್ತು ಸಮಾನತೆಯನ್ನು ಹೆಚ್ಚಿಸಲು ನಾವು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತೇವೆ.

ದೃಷ್ಟಿ

ಶಿಕ್ಷಣವನ್ನು ಸಾಮಾಜಿಕ-ಆರ್ಥಿಕ ಬದಲಾವಣೆಗೆ ವೇಗವರ್ಧಕವಾಗಿ ಬಳಸುವುದು, ಬಡತನವನ್ನು ತೊಡೆದುಹಾಕಲು ಮತ್ತು ಸಮಾನತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಎಲ್ಲಾ ಮಕ್ಕಳು ತಮ್ಮ ಪರಿಸ್ಥಿತಿಗಳಿಂದ ಮೇಲೆರಲು ಮತ್ತು ಸಮಾನ ಜಗತ್ತಿಗೆ ಕೊಡುಗೆ ನೀಡುವ ಶಕ್ತಿಯನ್ನು ತುಂಬುವುದು.

ತತ್ವ

ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಯಾವುದೇ ತಾರತಮ್ಯವಿಲ್ಲದೆ ಕೈಗೆಟುಕುವ ಶಿಕ್ಷಣವನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ, ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಮತ್ತು ಸಮಾಜಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಅವಕಾಶವಿರುವ ಒಂದು ಅಂತರ್ಗತ ವಾತಾವರಣವನ್ನು ಸೃಷ್ಟಿಸಲು ನಾವು ಸಮರ್ಪಿತರಾಗಿದ್ದೇವೆ. ಸಮಾನತೆಗೆ ನಮ್ಮ ಅಚಲ ಬದ್ಧತೆಯು ಪ್ರತಿಯೊಬ್ಬ ವಿದ್ಯಾರ್ಥಿಯು ನಮ್ಮ ಶೈಕ್ಷಣಿಕ ಸಮುದಾಯದಲ್ಲಿ ಗೌರವಿಸಲ್ಪಡುತ್ತಾರೆ.